ಅದೊಂದು ಮಳೆಗಾಲದ ದಿನ. ಬೆಳ್ಳಂಬೆಳಗ್ಗೆ ಫೋನ್

ಆಗ ನಾನು ಉಡುಪಿಯಲ್ಲಿ ವರದಿಗಾರನಾಗಿದ್ದೆ. ತಕ್ಷಣ ಮಿತ್ರ, ಛಾಯಾಚಿತ್ರಗ್ರಾಹಕ ಜನಾರ್ದನ ಕೊಡವೂರು ಅವರಿಗೆ ಆ ಹೂವನ್ನು ನೋಡಲು ಹೋಗೋಣ ಎಂದು ಹೇಳಿ ಬೈಕ್ನಲ್ಲಿ ಹೊರಟೇ ಬಿಟ್ಟೆವು. ಉಡುಪಿಯಿಂದ ಹೊರಡುವಾಗ ಆರೂರಿನ ಶೆಟ್ಟರ ಮನೆ ಎಷ್ಟು ದೂರ ಎಂಬುದರ ಅರಿವಿರಲಿಲ್ಲ. ಆದರೆ, ಬ್ರಹ್ಮಾವರದಿಂದ ಒಳಕ್ಕೆ ತಿರುಗಿ

ಅವರು ರಿಟೈರ್ಡ್ಮಿಲ್ಟ್ರಿಮೆನ್. ಸೇನೆಯಲ್ಲಿ ರಿಟೈರ್ಡ್ ಆದ ಬಳಿಕ ಮಂಗಳೂರಿನಲ್ಲಿ ವಿಜಯಾ ಬ್ಯಾಂಕ್ ಶಾಖೆಯಲ್ಲಿ ವೃತ್ತಿ ನಿರ್ವಹಿಸಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ನಾವು ನಮ್ಮ ಪರಿಚಯ ಹೇಳಿ ಹೂವನ್ನು ತೋರಿಸಲು ಹೇಳಿದೆವು. ಆದರೆ ಅಪರೂಪದ ಹೂವನ್ನು ನೋಡಬೇಕೆಂಬ ಆಸೆಯೊಂದಿಗೆ ಹೊರಟ ನಮಗೆ ತಣ್ಣೀರೆರಚಿದಂತಾಯಿತು. ಕಾರಣ... ಅದೊಂದು ಸಾ


ಈ ಘಟನೆ ನಡೆದು ಎರಡೂವರೆ ವರ್ಷದ ಬಳಿಕ ಮತ್ತೆ ನೆನಪಾದದ್ದು, ಅನಾನಾಸು ತಿನ್ನುವಾಗ. ಅಂದ ಹಾಗೆ ಆ ಅನಾನಾಸು ಅವರು ಕೊಟ್ಟ ಅನಾನಾಸಿನ ಜುಟ್ಟಿನಿಂದ ನೆಟ್ಟ ಗಿಡದ್ದು ! ಅವರು
ಅಂದು ಕೊಟ್ಟ ಅನಾನಸು ತಿಂದು ಅದರ ಮೇಲಿನ ಜುಟ್ಟನ್ನು ಮನೆಯ ಆವರಣದಲ್ಲಿ ನೆಟ್ಟಿದ್ದೆ. ಅದು ದೊಡ್ಡದಾಗಿ ಹೂಬಿಟ್ಟು, ಕಾಯಾಗಿ ಹಣ್ಣಾಗಿದೆ. ಹಣ್ಣು ತಿಂದಾಗ ಈ ಎಲ್ಲ ನೆನಪುಗಳು ಮರುಕಳಿಸಿತು. ಮಿತ್ರ ಜನಾರ್ದನ ಕೊಡವೂರು ಅವರಿಗೂ ಅನಾನಾಸಿನ ಬಗ್ಗೆ ಹೇಳಿ ಅನಾನಾಸಿನ ಫೋಟೋ ತೆಗೆದು ಮೇಲ್ ಮಾಡಿದ್ದೆ. ಅವರಿಗೂ ಈ ಕಥೆ ಒಂದು ಮರೆಯಲಾರದ ಘಟನೆಯಾಗಿ ಇನ್ನೂ ನೆನಪಿದೆ.
ಅಂದ ಹಾಗೆ ಆರೂರಿನಿಂದ ಬಂದ ಎರಡು ದಿನದ ಬಳಿಕ ಜನಾರ್ದನ ಅವರ ಮೊಬೈಲ್ ರಿಂಗಿಣಿಸಿತ್ತು. ಯಾಕೆ ಗೊತ್ತೆ...? ಅವರ ಗೆಳೆಯರೊಬ್ಬರು ಮನೆಗೆ ಬರಲು ತಿಳಿಸಿದ್ದರು. ಕಾರಣ ಹೇಳಿರಲಿಲ್ಲ. ಅವರು ತಕ್ಷಣ ಹೊರಟು ಬಿಟ್ಟಿದ್ದರು. ಅಲ್ಲಿ ಹೋದರೆ ಅವರು ಕರೆದದ್ದು ಅದೇ `ಅಪರೂಪ'ದ ಹೂವಿನ ಫೋಟೋ ತೆಗೆಯಲೆಂದು !